ಪ್ರತಿಯೊಬ್ಬ ಮನುಷ್ಯನು ಹೆಚ್ಚುಹೆಚ್ಚು ಸುಖಕ್ಕಾಗಿ ಚಡಪಡಿಸುತ್ತಿರುತ್ತಾನೆ. ಮನುಷ್ಯನು ವಿಜ್ಞಾನ, ಕಲೆ, ವಾಣಿಜ್ಯದಂತಹ ವಿವಿಧ ಕ್ಷೇತ್ರಗಳಲ್ಲಿ ಶಿಕ್ಷಣ ಪಡೆಯುತ್ತಾನೆ. ಶಿಕ್ಷಣದಿಂದ ನೌಕರಿ ಪಡೆದು ಅಥವಾ ವ್ಯವಹಾರ ಮಾಡಿ ವಾಹನ, ಮನೆ ಇತ್ಯಾದಿಗಳಿಂದ ಸುಖವನ್ನು ಪಡೆಯುತ್ತಾನೆ. ಇಂತಹ ಎಲ್ಲ ವಸ್ತುಗಳಿಂದ ಸುಖವನ್ನು ಪಡೆಯುತ್ತಾನೆ, ಆದರೆ ಅದು ಸತತವಾಗಿ ಉಳಿಯುವುದಿಲ್ಲ. ಸತತವಾಗಿ ಉಳಿಯುವ ಸರ್ವೋಚ್ಚ ಸುಖ, ಅಂದರೆ ಆನಂದವನ್ನು ಈಶ್ವರನು ಮಾತ್ರ ಕೊಡಬಲ್ಲನು. ಅದಕ್ಕಾಗಿ ಈಶ್ವರ ಪ್ರಾಪ್ತಿ ಮಾಡಿಕೊಳ್ಳಬೇಕಾಗುತ್ತದೆ. ಇದನ್ನು ಹೇಗೆ ಪಡೆಯುವುದೆಂದು, ಧರ್ಮವು ಕಲಿಸುತ್ತದೆ, ಆದುದರಿಂದ ಧರ್ಮಶಿಕ್ಷಣವು ನಿಜವಾದ ಶಿಕ್ಷಣವಾಗಿದೆ.